Posts

ಸಾವು ಸುತ್ತ ನೋವು

*ಸಾವು ಎಷ್ಟು ದೂರವೋ ಅಷ್ಟೇ ಸಮೀಪ!* ರಾತ್ರಿ ಕಳೆದು ಬೆಳಕು ಹರಿಯುವುದರೊಳಗೆ ಈ ಜಗತ್ತಿನಲ್ಲಿ ಅದೆಷ್ಟೋ ಬದಲಾವಣೆಗಳು ವಿಂಚಂತೆ ನಡೆದು ಹೋಗುತ್ತವೆ. ಸಮಯ ಕಳೆಯುವುದರೊಳಗೆ ಎಲ್ಲವೂ ಮುಗಿದು ಜೊತೆಗಿದ್ದವರು ಕೇವಲ ನೆನಪಾಗಿ ಉಳಿದುಬಿಡುತ್ತಾರೆ. ನಮ್ಮನ್ನು ಬಿಟ್ಟೂ ಬಿಡದೆ ಕಾಡುವ ಪ್ರಶ್ನೆಯೇ ಈ ಸಾವು. ನಾನು ಇದ್ದಾಗ ಸಾವು ಬರಲ್ಲ, ಸಾವು ಬಂದಾಗ ನಾನು ಇರಲ್ಲ ಎನ್ನುವ ಕವಿವಾಣಿ ನೆನಪಾಗುತ್ತದೆ.  ಕಳೆವ ಪ್ರತಿಯೊಂದು ಗಳಿಗೆಯನ್ನೂ ಸಂತಸದಿಂದ  ಕಳೆಯಬೇಕು. ಏಕೆಂದರೆ ಸಾವು ನಾಳೆಯೇ ಬರಬಹುದು! ಈ ನಿಮಿಷವೇ ಬರಬಹುದು! ಯಾರನ್ನೂ ಕೇಳದೆ ಯಾರಲ್ಲೂ ಹೇಳದೆ ಎಂದಾದರೂ ಒಂದು ದಿನ ಬಂದೇ ಬರುತ್ತದೆ…ಬೇಡ ಎಂದರೂ ಅಪ್ಪಿಕೊಳ್ಳುತ್ತದೆ. ಈ ಕಹಿಸತ್ಯ ತಿಳಿದಿದ್ದರೂ ಆ ದಿನ ನಡೆದ ಘಟನೆ ನನ್ನ ಕಣ್ಣನ್ನು ಒದ್ದೆಯಾಗಿಸಿತು. ಮನಸ್ಸು ಭಾವುಕವಾಯಿತು.  ನಾನು ದಿನಾ ಕಾಣುವ ರೈಲ್ವೆ ನಿಲ್ದಾಣದಲ್ಲಿ ಅದೆಷ್ಟೋ ಶ್ವಾನಗಳಿದ್ದರೂ ಕಳೆದ ಏಳೆಂಟು ತಿಂಗಳುಗಳ ಹಿಂದೆ ಒಂದು ಶ್ವಾನ ನನ್ನ ಗಮನ ಸೆಳೆಯಿತು. ನೋಡಲು ಗುಂಡುಗುಂಡಾಗಿದ್ದರಿಂದ ನಾವೇ ಪ್ರೀತಿಯಿಂದ ಗುಂಡ ಎಂದು ನಾಮಕರಣವನ್ನೂ ಮಾಡಿದೆವು. ನಿಲ್ದಾಣದಲ್ಲೇ ಸಾಕಷ್ಟು ಸಮಯ ಕಳೆಯಬೇಕಾಗಿದ್ದ ನಮಗೆ, ಈ ಗುಂಡನ ಆಟ ನೋಡುವುದೇ ಖುಷಿ. ನನ್ನಂತೆ ಇತರರಿಗೂ ಗುಂಡನೆಂದರೆ ಅಚ್ಚುಮೆಚ್ಚು. ಆತ ಪ್ರತಿದಿನ ರೈಲು ನಿಲ್ದಾಣದಲ್ಲಿ ನನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದ. ಗುಂಡನಿಗೆ ಬೇಕರಿ ತಿನಿಸು ತಿನ್ನಿಸ...

ಸಾವು ಸುತ್ತ ನೋವು

*ಸಾವು ಎಷ್ಟು ದೂರವೋ ಅಷ್ಟೇ ಸಮೀಪ!* ರಾತ್ರಿ ಕಳೆದು ಬೆಳಕು ಹರಿಯುವುದರೊಳಗೆ ಈ ಜಗತ್ತಿನಲ್ಲಿ ಅದೆಷ್ಟೋ ಬದಲಾವಣೆಗಳು ವಿಂಚಂತೆ ನಡೆದು ಹೋಗುತ್ತವೆ. ಸಮಯ ಕಳೆಯುವುದರೊಳಗೆ ಎಲ್ಲವೂ ಮುಗಿದು ಜೊತೆಗಿದ್ದವರು ಕೇವಲ ನೆನಪಾಗಿ ಉಳಿದುಬಿಡುತ್ತಾರೆ. ನಮ್ಮನ್ನು ಬಿಟ್ಟೂ ಬಿಡದೆ ಕಾಡುವ ಪ್ರಶ್ನೆಯೇ ಈ ಸಾವು. ನಾನು ಇದ್ದಾಗ ಸಾವು ಬರಲ್ಲ, ಸಾವು ಬಂದಾಗ ನಾನು ಇರಲ್ಲ ಎನ್ನುವ ಕವಿವಾಣಿ ನೆನಪಾಗುತ್ತದೆ.  ಕಳೆವ ಪ್ರತಿಯೊಂದು ಗಳಿಗೆಯನ್ನೂ ಸಂತಸದಿಂದ  ಕಳೆಯಬೇಕು. ಏಕೆಂದರೆ ಸಾವು ನಾಳೆಯೇ ಬರಬಹುದು! ಈ ನಿಮಿಷವೇ ಬರಬಹುದು! ಯಾರನ್ನೂ ಕೇಳದೆ ಯಾರಲ್ಲೂ ಹೇಳದೆ ಎಂದಾದರೂ ಒಂದು ದಿನ ಬಂದೇ ಬರುತ್ತದೆ…ಬೇಡ ಎಂದರೂ ಅಪ್ಪಿಕೊಳ್ಳುತ್ತದೆ. ಈ ಕಹಿಸತ್ಯ ತಿಳಿದಿದ್ದರೂ ಆ ದಿನ ನಡೆದ ಘಟನೆ ನನ್ನ ಕಣ್ಣನ್ನು ಒದ್ದೆಯಾಗಿಸಿತು. ಮನಸ್ಸು ಭಾವುಕವಾಯಿತು.  ನಾನು ದಿನಾ ಕಾಣುವ ರೈಲ್ವೆ ನಿಲ್ದಾಣದಲ್ಲಿ ಅದೆಷ್ಟೋ ಶ್ವಾನಗಳಿದ್ದರೂ ಕಳೆದ ಏಳೆಂಟು ತಿಂಗಳುಗಳ ಹಿಂದೆ ಒಂದು ಶ್ವಾನ ನನ್ನ ಗಮನ ಸೆಳೆಯಿತು. ನೋಡಲು ಗುಂಡುಗುಂಡಾಗಿದ್ದರಿಂದ ನಾವೇ ಪ್ರೀತಿಯಿಂದ ಗುಂಡ ಎಂದು ನಾಮಕರಣವನ್ನೂ ಮಾಡಿದೆವು. ನಿಲ್ದಾಣದಲ್ಲೇ ಸಾಕಷ್ಟು ಸಮಯ ಕಳೆಯಬೇಕಾಗಿದ್ದ ನಮಗೆ, ಈ ಗುಂಡನ ಆಟ ನೋಡುವುದೇ ಖುಷಿ. ನನ್ನಂತೆ ಇತರರಿಗೂ ಗುಂಡನೆಂದರೆ ಅಚ್ಚುಮೆಚ್ಚು. ಆತ ಪ್ರತಿದಿನ ರೈಲು ನಿಲ್ದಾಣದಲ್ಲಿ ನನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದ. ಗುಂಡನಿಗೆ ಬೇಕರಿ ತಿನಿಸು ತಿನ್ನಿಸ...

https://citizenlive.news/c-special/world-radio-day-special-article/

 https://citizenlive.news/c-special/world-radio-day-special-article/

ಇನ್ನೂ ಉಸಿರಾಡುತ್ತಿವೆ ಕಾಞಂಗಾಡಿನ ಕನ್ನಡ ಶಾಲೆಗಳು…*

 *ಇನ್ನೂ ಉಸಿರಾಡುತ್ತಿವೆ ಕಾಞಂಗಾಡಿನ ಕನ್ನಡ ಶಾಲೆಗಳು…* ಕೇರಳ ರಾಜ್ಯದ ಸ್ವರ್ಣ ಕಿರೀಟ, ಕರುನಾಡ ಜೊತೆ ಗಡಿಯನ್ನು ಹಂಚಿಕೊಂಡ ಕಾಸರಗೋಡು ಜಿಲ್ಲೆಯ ಒಂದು ಪಟ್ಟಣ ಕಾಞಂಗಾಡ್. ಒಂದು ಕಾಲದಲ್ಲಿ ಇಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೀಗ ಕಾಞಂಗಾಡ್ನಲ್ಲಿ ಕೇವಲ ಇಂಗ್ಲಿಷ್, ಮಲೆಯಾಳಂ ಮಾಧ್ಯಮ ಮಾತ್ರ ಇದೆ ಎಂದು ನನ್ನ ಸ್ನೇಹಿತ ವಾದಿಸಿದಾಗ ಕೆಲವು ಕನ್ನಡ ಶಾಲೆಗಳು ಇನ್ನೂ ಇಲ್ಲಿ ಉಸಿರಾಡುತ್ತಿವೆ ಎಂದು ಅವನನ್ನು ನಂಬಿಸಲು ನಾನು ನನ್ನ ಅಂಕಪಟ್ಟಿಯನ್ನೇ ತೋರಿಸಬೇಕಾಯಿತು!  ನಾನು ಇಂಗ್ಲಿಷ್ ಅಥವಾ ಮಲಯಾಳಂ ಮಾಧ್ಯಮದಲ್ಲಿ ಕಲಿತರೆ ಒಳ್ಳೆಯದು ಎಂಬ ಅಭಿಪ್ರಾಯಕ್ಕೆ  ಅಮ್ಮ ಸುತಾರಾಂ ಒಪ್ಪಿರಲಿಲ್ಲ. ಯಾರ ಒತ್ತಾಯಕ್ಕೂ ಮಣಿಯದೆ ಕನ್ನಡ ಕಲಿಯಬೇಕೆಂದು ಅಕ್ಕನನ್ನೂ, ನನ್ನನ್ನೂ ಕನ್ನಡ ಶಾಲೆಗೆ ಸೇರಿಸಿದಳು. ಅಂದು ಅಮ್ಮ ನನ್ನನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸದಿರದಿದ್ದಿದ್ದರೆ ಇಂದು ನನಗೆ ಅಕ್ಷರಗಳನ್ನು ಪೋಣಿಸಲೂ ಆಗುತ್ತಿರಲಿಲ್ಲ. ಮನೆಯವರಿಗೆ ಕನ್ನಡ ಭಾಷೆಯ ಮೇಲಿದ್ದ ಮಾತೃಭಾಷೆಯೆಂಬ ಅಕ್ಕರೆ, ಕಾಸರಗೋಡಿನ ಕನ್ನಡಿಗನೆಂಬ ಬಿರುದು ನಾನು ಕನ್ನಡವನ್ನು ಪ್ರೀತಿಸುವಂತೆ ಮಾಡಿತ್ತು.  ಕಾಞಂಗಾಡಿನ ಕನ್ನಡ ಮಾಧ್ಯಮ ಶಾಲೆಗಳು ಕಾಸರಗೋಡು ಜಿಲ್ಲೆಯಲ್ಲಿ ದಕ್ಷಿಣದ ಕಟ್ಟಕಡೆಯ ಕನ್ನಡ ವಿದ್ಯಾದೇಗುಲಗಳು. ಈ ಶಾಲೆಗಳ ಉಳಿವಿಗಾಗಿ ಇಲ್ಲಿನ ಕನ್ನಡಿಗರು ನಿರಂತರ ಹೋರಾಟದಲ್ಲಿ ತೊಡಗಿದ್ದಾರೆ. ಈ ಭಾಗದಲ್ಲಿ ಎರಡು ಕನ್ನಡ ಮಾ...

https://vijaykarnataka.com/lavalavk/weekly-magazine/special-article-on-kannada-rajyotsava-kannada-medium-schools-in-kanhangad/articleshow/87449100.cms

ಸೂರ್ಯಾಸ್ತ

ನಾನು ಕಂಡ ಸೂರ್ಯಸ್ತಮಾನ ಮೂಡಣದಿ ಮೂಡಿದ ದಿನಕರ ಭಾನಚೆ ಜಾರುವ ಗಳಿಗೆ ಚೆಲ್ಲಿತು ಆಗಸದಲ್ಲಿ ಕಂಡಿತು ಕೆಂಬಣ್ಣದ ಮಳಿಗೆ ಮನಮುಟ್ಟುವ ತಂಗಾಳಿಯ ಸುಗಂಧದ ನಡಿಗೆ ಬೇಕಲ ಕೋಟೆ ಆಸ್ತಿ ಈ ಭವ್ಯ ನಾಡಿಗೆ ಚೆಲ್ಲಿದ ಕಿರಣವು ಮಾಯವಾಗುವ ಹಾಗೆ ಸಮುದ್ರರಾಜನ ಪ್ರೀತಿಯ ನಮ್ರತೆಯ ವಿದಾಯವು ಹೀಗೆ ಯಾಕೆಂದರೆ ಅದಾಗಲ್ಲೇ ಬೀರಿತ್ತು ಮುಸ್ಸಂಜೆ ನಗೆ ಆ ನಗುವ ಕಂಡು ಹೂವು ಅರಳಲು ಮನದೊಳಗೆ ಸಾಗರದ ಮಾರುತದ ಮಧುರ ಸ್ಪರ್ಶದ ಸಿಂಚನ ಜೊತೆಯಲ್ಲಿ ಸೂರ್ಯಸ್ತದ ಸುಮಧುರ ಕ್ಷಣ ಕಣ್ತುಂಬಿಕೊಳ್ಳುವ ಈ ಗಳಿಗೆ ಬಾಳಿಗೆ ಹೋಳಿಗೆ ಇನ್ನು ಕೇವಲ ಇರುವುದು ನೆನಪುಗಳೇ ಬಳಿಗೆ ಸಾಗರದ  ತೆರೆಗಳ ಮಧ್ಯೆ ತೆರೆಎಳೆಯಲು ಹೊರಟ ರವಿ ಆ ದಿವ್ಯಾನುಭೂತಿ ಸವಿದ ರಸಕವಿ ಕವಿಯ ಮನದೊಳಗಡೆ ಹುಟ್ಟಲು ಹೊಸ ಕವಿತೆ ಕವಿ ಎನ್ನಲು ಮಂಜು ಕರಗಿದಂತೆ ನಾ ಸೋತೆ ಸೋತೆ ಗಿರೀಶ್ ಪಿಎಂ ಕಾಸರಗೋಡು